ಶುಕ್ರವಾರ, ಮೇ 6, 2011

ನೀರು ನಿಲುದಾಣ

'ನೀರೆ' ನಿಲುದಾಣ

ಮಾತಿಲ್ಲದ ಕಥೆ,

ಜಗದ ವ್ಯಥೆ.
ಮೌನದ ಜೊತೆ,
ಸಂಗೀತದ ಲತೆ.
ಬೆಳಕೂ ಮೆರೆಯಿತೇ,
ಜನರಲ್ಲಿರದ ನೀರವತೆ.
ಇದು ಇಂದಿನ ಕೊರತೆ.



ಟ್ರಿನ್ ............ಅಂತ ಶಬ್ದ ಮೊಳಗಿತು.    ನಮ್ಮೂರ ಟೆಂಟ್ ಪರದೆ ಮೇಲೆ ಸಿನಿಮಾ ಶುರುವಾಗ್ತಿದ್ದಂತೆಯೇ,  ಪ್ರಶಾಂತ ಪ್ರಕೃತಿಯನು ಸೀಳಿದ ಭಾವದೊಲುಮೆಗಳ ಮೇಲಾಟ. ಸದ್ದುಸುರುತ್ತಾ ಸದಾ ಹರಿವ ನೀರೇ ಹೀರೋ, ಹೀರೋಯಿನ್ ಎಲ್ಲಾನೀರಿನ ಸುತ್ತ ನೀರೆನೀರೆ ಹಿಂದೆ ನೀರವಮೌನ. ಮೌನದಲ್ಲಿ ಕಾಮಿಸುವ ಮನಸು. ಮರ್ಕಟ ಮನಸಿಗೆ ಮರುಗುವ ಜನ. ಜನರಿಂದೆ ಜನ. ಒಬ್ಬೊಬ್ಬರು ಒಂದು ತಲೆಮಾರು. 

ಅವಳೊಬ್ಬಳು. ಅದು ಬಯಲುದಾರಿಯಲ್ಲಿ ಬಸವಳಿದ ಜೀವ. ನಲ್ಲಿ ಕಂಡೊಡನೆ ಕುಳಿತಳಲ್ಲಿ. ಲೋಟದ ನೋಟಕೆ ದಾಹತಣಿಯಿತು. ಹೆಜ್ಜೆ ಅರಸಿದವು. ಅವನೊಬ್ಬ ಯಾತ್ರಿ, ದಾಹ ತಣಿಸಿಕೊಂಡು, ಕಡೆಗೆ ನೀರಿನ ಬುಡಕ್ಕೆ ಬಾಯಿಟ್ಟ. ನೀರಿದ್ದಲ್ಲಿ ನಿಂತವು ಪ್ರಾಣಿಗಳು. ಹದಿಹರೆಯಕೆ ಹರಕೆಯಂತಿದ್ದ ನವರಸಶ್ರೇಷ್ಠ ಶೃಂಗಾರದಲಿ ರಮಿಸಿದವು. ಬಟಾಬಯಲಲ್ಲಿ ಬೆತ್ತಲಾದದ್ದ ಕಂಡು, ನೋವನುಂಡು, ನಿರ್ಗಮಿಸಿದವು.

  ಮೂಲೆಯಲ್ಲಿ ತಿರುತಿರುಗಿ ಮಲಗಿ, ರವಿಯೊಡನೆ ರಸಗಳಿಗೆ ಅನುಭವಿಸಿ ಜೀವಂತ ಕಾಣುವ ಜೀವಿ. ಜಗದಾಗು ಹೋಗುಗಳ ವೀಕ್ಷಕ. ಕಣ್ಣಲ್ಲಿ ಕಂಡದ್ದು ಮುದುಕಿ. ಮಟಮಟ ಮಧ್ಯಾಹ್ನ. ಬಾಯಾರಿಕೆ. ನೀರಿನ ಕನವರಿಕೆ. ಗಂಟಲೊಳಗೆ ನೀರಿಳಿಯಿತು. ಜೀವ ಧರೆಗುರುಳಿತು. ಹಿಂದಿಂದ ಬಂದಿಬ್ಬರು ಸಾವೆಂದು ಸಾಗಿಸುತ ಮುನ್ನಡೆದರು.

 ವೇದಿಕೆಯಲಿ ನಡೆದ ನಾಟಕಕ್ಕೆಸುತ್ತ ಕತ್ತಲ ಪರದೆ. ಬಲಕೆ ಗುಡ್ಡ. ಎಡಕೆ ಗೋಡೆ. ಹಿಂಭಾಗವೊಂದು ಬೆಳ್ಳಿಪರದೆಪಕ್ಕ ಕಾಲುಹಾದಿ. ಮೇಲೆಲ್ಲಾ ಬೆಳಕಿಂಡಿಗಳು. ಆ ಬೆಳಕುಭಾವಕ್ಕೆ ಬಂಧು. ವೇದಿಕೆ ಮಧ್ಯೆ "ನಲ್ಲಿ" ಯು ಒಂದು. ನಲ್ಲಿಯೇ ನಾಟಕದ ಕೇಂದ್ರಬಿಂದು. ಒಂದೇ ನಿಲುದಾಣ, ಹಲವರ ಬದುಕಿನ-ಹಲವು ನಿಲುಗಡೆಗೆ ನಾಂದಿ ಹಾಡಿತುಬಸವಜಯಂತಿಯಂದು. ನಿನಾಸಂ ಮರುತಿರುಗಾಟದಲಿ ಪ್ರದರ್ಶನಗೊಂಡ ನಾಟಕ, ಜಂಗಮವಾಣಿಗಳ ಕಿರಿಕಿರಿ, ನೀರೆಯರ ಮಾತಿ ಝರಿಯ ನಡುwayಯೂ, way ಇಲ್ಲದೇ ಸಹೃದಯರ ಸೂರೆಗೊಂಡಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ